ಹುಬ್ಬಳ್ಳಿ : ಹೊರ ರಾಜ್ಯದಿಂದ ನಿಷೇಧಿತ ಗಾಂಜಾ ತಂದು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಅಕ್ರಮವಾಗಿ “ಕಸ್ಟಮರ್” ಗಳಿಗೆ ಸೇಲ್ ಮಾಡುತ್ತಿದ್ದ ಐದು ಜನ ರಿಟೇಲ್ ವ್ಯಾಪರಸ್ಥರನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಫೊಲೀಸರು ಯಶಸ್ವಿಯಾಗಿದ್ದಾರೆ
ವೀರಾಪೂರ ಓಣಿಯ ಮೆಹಬೂಬಸಾಬ್ ಹೊನ್ನಳ್ಳಿ ಕೇಶ್ವಾಪೂರದ ತೌಸಿಫ್ ಹೊನ್ನಳ್ಳಿ, ರಾಮಲಿಂಗೇಶ್ವರ ನಗರದ ಚಂದ್ರಶೇಖರ್ ಜಲ್ಲನಕುಟ್ಟಾ ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು ಐದು ಜನ ಬಂಧಿತ ಆರೋಪಿಗಳಾಗಿದ್ದಾರೆ
ಇನ್ಸಪೆಕ್ಟರ್ ಅಲಿ ಶೇಖ್ ನೇತೃತ್ವದ ತಂಡ ಪಕ್ಕಾ ಬಾತ್ಮಿ ಬಂದ ಹಿನ್ನಲೆಯಲ್ಲಿ ಮಂಟೂರ ರಸ್ತೆಯ ರೇಲ್ವೆ ಗೇಟ್ ಬಳಿ ಗಾಂಜಾ ಸೇಲ್ ಮಾಡಲು ಕಸ್ಟಮರ್’ಗಳನ್ನು ಕಾಯುತ್ತಿದ್ದಾಗ ಗಾಂಜಾ ವ್ಯಾಪಾರಸ್ಥರ ಮೇಲೆ ದಾಳಿ ಮಾಡಿದ ತಂಡ ಮೂರು ಲಕ್ಷ ಮೌಲ್ಯದ ಬರೋಬ್ಬರಿ ಮೂರು ಕೆಜಿ ಗಾಂಜಾ ಸಮೇತ ಐದು ಜನರನ್ನು ಬಂಧಿಸಿ NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
PSI ಶರಣು ದೇಸಾಯಿ, ಸಿಬ್ಬಂದಿಗಳಿಗಾದ HC ಚಿದಾನಂದ ಅಂಬಿಗರ, ನೂರ ಅಹ್ಮದ್ ನೀಲಗಾರ, ರಾಮು, ಸೋಮು, ಹನುಮಂತ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಪೊಲೀಸರ ಈ ಕಾರ್ಯವನ್ನು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಶ್ಲಾಘಿಸಿದ್ದಾರೆ