ಅಪರಾಧ

ಗದಗ ಜಿಲ್ಲೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ ..! ತೆಲಂಗಾಣ ರಾಜ್ಯದ ಕುಖ್ಯಾತ ಕಳ್ಳನ ಬಂಧನ..!

ಗದಗ : ತೆಲಂಗಾಣ ರಾಜ್ಯದ ಹೈದ್ರಾಬಾದ ನಗರದ ಜಲಪಲ್ಲಿ ಮೂಲದ ಓರ್ವ ಕುಖ್ಯಾತ ಅಂತರ ರಾಜ್ಯ ಮನೆಗಳ್ಳನನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ಠಾಣೆಯ ಅಪರಾಧ ವಿಭಾಗದ ಪೂಲೀಸರು ಯಶಸ್ವಿಯಾಗಿದ್ದಾರೆ

ರಾಜು ನರಸಿಂಗರಾವ್ ಮಸ್ಕಳೆ ಎಂಬ ಕಳ್ಳನೇ ಬಂಧಿತ ಆರೋಪಿಯಾಗಿದ್ದು ಬಂಧಿತನಿಂದ  ಸುಮಾರು 7ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ಒಂದು ಬುಲೆನೋ ಕಾರ್ ಸೇರಿದಂತೆ ಒಟ್ಟು 15 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ಹಲವು ದಿನಗಳಿಂದ ಜಿಲ್ಲೆಯಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ಗದಗ ಜಿಲ್ಲೆಯ SP ಬಿ ಎಸ್ ನೇಮಗೌಡ ಸೂಚನೆಯ ಮೆರೆಗೆ ಹೆಚ್ಚುವರಿ SP ಎಂ ಬಿ ಸಂಕದ, ನರಗುಂದ ವಿಭಾಗದ DYSP ಡಿ ಕೆ ಪ್ರಭುಗೌಡ ಮಾರ್ಗದರ್ಶನ ಹಾಗೂ ರೋಣ ಸಿಪಿಐ ಎಸ್ ಎಸ್ ಬೀಳಗಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ 

ಪಿಎಸ್ಐ ಎಲ್ ಕೆ ಜೂಲಕಟ್ಟಿ, ಪಿಎಸ್ಐ ಸೋಮನಗೌಡ ಗೌಡರ, ಎಸ್ ವ್ಹಿ ಹಲಬಾಗಿಲು, ಜೆ ಬಿ ಪೂಜಾರ, ಎನ್ ವ್ಹಿ ಮಂತಾ, ಪಿ ಆರ್ ಹೊಂಬಳ, ಹೆಚ್ ವಾಯ್ ಮ್ಯಾಗಳಮನಿ, ಎಸ್ ವ್ಹಿ ಕದಂ, ಡಿ ವ್ಹಿ ಭೂಸನೂರಮಠ, ಶರಣಪ್ಪ ಓಜನಹಳ್ಳಿ, ಶಿವಕುಮಾರ ಹುಬ್ಬಳ್ಳಿ, ಕುಮಾರ ತಿಗರಿ, ಅಜಾತ್ ಗುರಮ್ಮನವರ, ಮಲ್ಲಮ್ಮ ಕೊಟಗಿ, ತಾಂತ್ರಿಕ ವಿಭಾಗದ ಗುರುರಾಜ್ ಬೂದಿಹಾಳ, ಸಂಜೀವ ಕೊರಡೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ತಂಡದ ಕಾರ್ಯವನ್ನು SP ಬಿ ಎಸ್ ನೇಮಗೌಡ ಶ್ಲಾಘಿಸಿದ್ದಾರೆ

Related Posts

Leave a Reply

Your email address will not be published. Required fields are marked *