ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ವ್ಯಕ್ತಿಯೋರ್ವನ ಮೇಲೆ ಪಂಚ್ ನಿಂದ ಹಲ್ಲೆ ಮಾಡಿರುವ ಘಟನೆ ನಗರದ ಸಿಬಿಟಿ ಬಳಿ ಗುರುವಾರ ನಡೆದಿದೆ.
ಅರಿಫ್ ಕಾಲ್ವಾಡ ಎಂಬ ವ್ಯಕ್ತಿಯ ಮೇಲೆ ಅಕಿಬ್ ಅಕ್ತರ್ ಹಾಗೂ ಆತನ ಸ್ನೇಹಿತರಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದೆ.
ಪಂಚ್ ನಿಂದ ಹಲ್ಲೆ ಮಾಡದಿರುವುದಾಗಿ ತಿಳಿದು ಬಂದಿದ್ದು, ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.