ಅಪರಾಧಬ್ರೇಕಿಂಗ್ ನ್ಯೂಸ್

ಹಡೆದ “ತಂದೆ”ಯನ್ನೇ ಹೊಡೆದು ಕೊಂದ “ಮಗ”..! ರಿಕಾಮಿ ಮಗನನ್ನು ಹಿಡಿದು ಹೊತ್ತು ತಂದ “ಸರ್ಕಲ್ ಇನ್ಸಪೆಕ್ಟರ್”..!

ಹುಬ್ಬಳ್ಳಿ : ಕೆಲಸವಿಲ್ಲದೆ ರಿಕಾಮಿ ತಿರುಗುತ್ತಿದ್ದ ಮಗನ್ನನು ಪ್ರಶ್ನೇ ಮಾಡಿದ್ದರಿಂದ ಇಬ್ಬರ ಮಧ್ಯ ನಡೆದ ಜಗಳ ತಾರಕಕ್ಕೇರಿದ ಪರಿಣಾಮ ಹಡೆದ ತಂದೆಯನ್ನ ಮಗನೇ ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಸಮೀಪದ ಗಿರಿಯಾಲ ಗ್ರಾಮದಲ್ಲಿ ನಡೆದಿದೆ

ಉಮೇಶ ಸುಡಕೇನವರ ಎಂಬ 58 ವರ್ಷದ ವೃದ್ದ ವ್ಯಕ್ತಿಯೇ ಕೊಲೆಯಾದ ದುರ್ದೈವಿಯಾಗಿದ್ದು ಸಿಟ್ಟಿನ ಭರದಲ್ಲಿ ಮನೆಯಲ್ಲಿದ್ದ ಕೃಷಿ ಉಪಯೋಗಿ ಸಲಕೆಯಿಂದ ಹೊಡೆದು ತನ್ನ ತಂದೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಮಗ ಹನುಮಂತಪ್ಪ ಸುಡಕೇನವರನನ್ನು ಕೊಲೆಯಾದ ಒಂದೇ ಒಂದು ಘಂಟೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ‘ಸರ್ಕಲ್ ಇನ್ಸಪೆಕ್ಟರ್’ ಮುರಗೇಶ ಚನ್ನಣ್ಣವರ  ಮತ್ತು ಅವರ  ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ

ಈ ಕುರಿತು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲೆಯ ಹಿರಿಯ ಪೊಲೀಸ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ

Leave a Reply

Your email address will not be published. Required fields are marked *