Congressಕರ್ನಾಟಕ

ನೀವೆಲ್ಲ ಹಿಂದುಳಿಯಲು ಜಾತಿ ವ್ಯವಸ್ಥೆಯೇ ಕಾರಣ; ಸಿಎಂ ಸಿದ್ದರಾಮಯ್ಯ ಬೇಸರ

ಹೈಲೈಟ್ಸ್‌:

  • ನೀವೆಲ್ಲ ಹಿಂದುಳಿಯಲು ಜಾತಿ ವ್ಯವಸ್ಥೆಯೇ ಕಾರಣ; ಸಿಎಂ ಸಿದ್ದರಾಮಯ್ಯ ಬೇಸರ
  • ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಿಲ್ಲ. ಮೌಢ್ಯತೆ ಹೋಗಿಲ್ಲ
  • ನನಗೆ ಅವಕಾಶ ಸಿಕ್ಕಿತ್ತು ನಾನು ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಅಣ್ಣಂದಿರು ವ್ಯವಸಾಯ ಮಾಡುತ್ತಿದ್ದಾರೆ

ಚಿತ್ರದುರ್ಗ: ‘ನೀವೆಲ್ಲ ಹಿಂದುಳಿಯಲಿಕ್ಕೆ ಜಾತಿ ವ್ಯವಸ್ಥೆಯೇ ಕಾರಣ. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ಸಮ ಪ್ರಮಾಣದಲ್ಲಿ ಸಮಾನತೆ ಸಿಗಬೇಕು ಎಂದು ಹೇಳಿದೆ. ಅವು ಎಲ್ಲರಿಗೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ಆದರೆ ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದೆ. ಜಾತಿ ವ್ಯವಸ್ಥೆ ಚಾಲನೆ ರಹಿತ ವ್ಯವಸ್ಥೆಯಾಗಿದೆ. ಬದಲಾವಣೆಯಾಗುವುದಿಲ್ಲ. ನೀರಿನ ಮೇಲಿನ ಕೊಳೆ ಇದ್ದ ಹಾಗೆ’ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಹೊಸದುರ್ಗದ ಜಗದ್ಗುರು ಚಿಮ್ಮಲಾದ್ರಿ, ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಪೀಠ ಮಹಾಸಂಸ್ಥಾನ ಮಠದ ವತಿಯಿಂದ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದ ಮಹಾಪುರಿ ಮಹಾಸ್ವಾಮಿಗಳ ಪಟ್ಟಾಭಿಷೇಕದ ರಜತ ಮಹೋತ್ಸವ ಹಾಗೂ ರಾಷ್ಟ್ರೀಯ ಭಗೀರಥೋತ್ಸವ ಮತ್ತು ಉಪ್ಪಾರ ಬೃಹತ್ ಸಮಾವೇಶ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಿಲ್ಲ. ಮೌಢ್ಯತೆ ಹೋಗಿಲ್ಲ. ಬಸವತೀತರು ಕಂದಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಯಾರಿಗೆ ಅವಕಾಶ ಸಿಕ್ಕಿದೆ ಅವರು ಮುಂದೆ ಬಂದಿದ್ದಾರೆ. ಯಾರಿಗೆ ಅವಕಾಶ ಸಿಕ್ಕಿಲ್ಲ ಅವರು ಅಲ್ಲಿಯೇ ಇದ್ದಾರೆ. ನನಗೆ ಅವಕಾಶ ಸಿಕ್ಕಿತ್ತು ನಾನು ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಅಣ್ಣಂದಿರು ವ್ಯವಸಾಯ ಮಾಡುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಅವಿದ್ಯಾವಂತರನ್ನಾಗಿ ಮಾಡಬೇಡಿ’ ಎಂದು ಹೇಳಿದರು.

‘ಸ್ವಾಮೀಜಿಯೊಬ್ಬರು ದೇವಸ್ಥಾನಕ್ಕೆ ಹೋದರೆ ಆ ದೇವಸ್ಥಾನದ ಆವರಣವನ್ನು ತೊಳೆದರಂತೆ. ಸಂವಿಧಾನ ಬಂದು 75 ವರ್ಷ ಆದರೂ ಈ ಕಾಲದಲ್ಲೂ ಇದೆಲ್ಲ ನಡೆಯುತ್ತಿದೆ. ನೀವು ಅಲ್ಲಿಗೆ ಹೋಗಲೇಬೇಡಿ. ನೀವೇ ಒಂದು ದೇವಸ್ಥಾನ ಕಟ್ಟಿಕೊಳ್ಳಿ. ನೀವೇ ಪೂಜಾರಿ. ಒಂದೇ ಮತ, ಒಂದೇ ಜಾತಿ ಒಂದೇ ದೇವಸ್ಥಾನ ಎಂದು ನಾರಾಯಣ ಗುರು ಹೇಳಿದ್ದಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸಿ, ದ್ವೇಷಿಸಬೇಡಿ’ ಎಂದರು.

Shares:

Leave a Reply

Your email address will not be published. Required fields are marked *