ಹುಬ್ಬಳ್ಳಿ: ನಗರದಲ್ಲಿ ದಲಿತ ಸಂಘಟನೆಯ ಮುಖಂಡನ ಮಗನನ್ನು ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡ ಹಿಂದೆ ಬಿದ್ದಿರುವ ಬಗ್ಗೆ ದೂರು ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದಲಿತ ಸಂಘಟನೆಯ ಮುಖಂಡ ಮಾರುತಿ ದೊಡ್ಡಮನಿ ಮಗನಾದ ಅನುಪ್ ದೊಡ್ಡಮನಿಯನ್ನು ಅವರದೇ ಕುಟುಂಬದ ವ್ಯಕ್ತಿಯು ಕೌಟುಂಬಿಕ ಕಲಹದ ಹಿನ್ನೆಲೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶ ಇಟ್ಟಿರುವ ಬಗ್ಗೆ ದೂರು ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು ಸಿಸಿಟಿವಿ ಕ್ಯಾಮರಾ ಸಹಾಯದಿಂದ ಆರೋಪಿ ಆಕಾಶ್ ದೊಡ್ಡಮನಿಯನ್ನು ಬಂಧಿಸಿ, ಬಂಧಿತನಿಂದ ಚಾಕು ವಶಕ್ಕೆ ಪಡೆದು ಕಾನೂನಿನ ಚೌಕಟ್ಟಿನಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಸರಿಯಾದ ತನಿಖೆ ಮಾಡಿಲ್ಲ ಆರೋಪಿಯನ್ನು ಬಿಟ್ಟು ಕಳಸಿದ್ದಾರೆ ಅಂತ ಆರೋಪಿಸಿ ನಿನ್ನೆ ತಡ ರಾತ್ರಿ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯ ಎದುರು ಮಾರುತಿ ದೊಡ್ಡಮನಿ ಹಾಗೂ ಕುಟುಂಬಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್ ಆಗಮಿಸಿ ಪ್ರತಿಭಟನೆ ನಿರತ ದೊಡ್ಡಮನಿ ಕುಟುಂಬಕ್ಕೆ ಹೊಸದಾಗಿ ಜಾರಿಯಾಗಿರುವ ಕಾನೂನಿನ ತಿಳುವಳಿಕೆ ಹೇಳುವ ಮೂಲಕ ಸಮಾಧಾನ ಪಡಿಸಿ ಮನೆಗೆ ಹೋಗುವಂತೆ ಸೂಚಿಸಿ ವಾತಾವರಣ ತಿಳಿಗೊಳಿಸಿದರು.